Thursday, December 11, 2008

ಊರ ಜಾತ್ರೆ


ಊರಿನ ತೇರನು
ನೋಡಲಿಕೆ೦ದು
ಜನರೆಲ್ಲರು ಬಂದು

ದೇವರ ಉತ್ಸವ
ಬಲಿಯನು ನೋಡಲು
ಮೌನದಿ ತಾ ನಿಂದು

ಡೋಲು ಗಂಟೆಯು
ವಾದ್ಯವು ಕಹಳೆಯು
ಸದ್ದನು ಮಾಡಿರಲು

ಮಲ್ಲಿಗೆ ಸಂಪಿಗೆ
ಬಗೆ ಬಗೆ ಹೂಗಳ
ಪರಿಮಳ ತುಂಬಿರಲು


ಚೆಂಡೆಯ ಬಡಿದು
ಪಟಾಕಿ ಸಿಡಿದು
ಸಡಗರದಿಂದಿರಲು

ದೇವರ ಹೊತ್ತು
ಬಲಿಯನು ಬರುತಿರೆ
ಭಕ್ತರು ಜಯವೆಂದು

ದೇವರ ರಥದಲಿ
ಕೂರಿಸಿ ತೇರನು
ಎಳೆಯುತ ನಡೆತಂದು

ಹರಿಯುವ ನದಿಯ
ಬದಿಯಲಿ ನಿಲ್ಲಿಸಿ
ಪೂಜೆಯ ಕೈಗೊಂಡು

ದೇವರು ಸ್ನಾನವ
ವಿರಚಿಸೆ ಜಾತ್ರೆಯು
ಕೊನೆಯಾಯಿತು ಅಂದು .

(ಕವಿ :ಸುಬ್ರಹ್ಮಣ್ಯ ಭಟ್ )

***

No comments: