skip to main
|
skip to sidebar
ನವನೀತ
ಮುಗ್ಧ ಮನಸಿನ ಸುಪ್ತ ಸಂತೋಷ ....
Tuesday, December 8, 2009
ಬಾಲನ ಕರೆ ....
ಮೂಡಿದ ರವಿಯು
ಮುಳುಗುವ ಸಮಯಕೆ
ಗೂಡನು ಸೇರುವ ಹಕ್ಕಿಗಳೇ
ದಿನವಿಡೀ ಕಾಡಲಿ
ನಾಡಲಿ ಹಾರುತ
ಕಾಳನು ಅರಸುವ ಹಕ್ಕಿಗಳೇ
ವಿಧ ವಿಧ ಬಣ್ಣದಿ
ಮಧುರ ಸ್ವರದಲಿ
ಚಿಲಿ ಪಿಲಿಗುಟ್ಟುವ ಹಕ್ಕಿಗಳೇ
ಸಂಜೆಯ ಹೊತ್ತಲಿ
ನಿಮ್ಮೊಡನಾಡಲು
ಬರುತಿಹೆ ನಾನು ಹಕ್ಕಿಗಳೇ
***
Friday, December 4, 2009
ಸೂರ್ಯನಿಗೆ ನಮನ
ಸಹಸ್ರ
ರಶ್ಮಿಯನು
ಬೀರುವ
ಜಗದ ಕರ್ಮದ ಸಾಕ್ಷಿಯೇ
ತೇಜೋಮಯ ಪ್ರದೀಪ ನಿನ್ನಯ
ಚರಣಕನುದಿನ ನಮಿಸುವೆ
ಪುಂಜ
ಪುಂಜದಿ
ಬೆಳಕನೀಯುತ
ಮೂಡು ದಿಕ್ಕಲಿ ಮೂಡುವೆ
ಮತ್ತೆ ಏರುತ ಪ್ರಖರನಾಗುತ
ಭೂಮಿಯನ್ನು ಬೆಳಗುವೆ
ಹೊನ್ನ ಬಣ್ಣದ ಕಿರಣವೀಯು
ತ
ಮೋಡದೆಡೆಯಲಿ
ಅಡಗುವೆ
ಮತ್ತೆ ಸಂಜೆಯ ತಂಪು ಕಂಪಲಿ
ಶರಧಿಯಾಚೆಗೆ ಇಳಿಯುವೆ
ಸಸ್ಯ ಪ್ರಾಣಿ ಸಂಕುಲವನೆಲ್ಲವ
ಕಾಲ ಕಾಲಕೆ ಬೆಳೆಸುವೆ
ಜಗದ ಜೀವಕೆ ಆರೋಗ್ಯ ಭಾಗ್ಯವ
ಕೊಡುವ ನಿನಗೆ ನಮಿಸುವೆ .
**
Thursday, November 19, 2009
ಚಂದಿರ ಬಾ ಬಾರೋ ..
ಮಾಮರದೆಡೆಯಲಿ
ಮೋಡದ ಮರೆಯಲಿ
ಚಲಿಸುವ ಚಂದಿರ ಬಾ ಬಾರೋ
ತಿಂಗಳ ಬೆಳಕಿನ
ತಂಪಿನ ಕಿರಣವ
ಬೀರುವ ಚಂದಿರ ಬಾ ಬಾರೋ
ಹೂವಿನ ಪರಿಮಳ
ತಣ್ಣನೆ ಗಾಳಿಯ
ಜೊತೆ ಸೇರುತ ನೀ ಬಾ ಬಾರೋ
ಅಮ್ಮನ ಜೊತೆಗೆ
ಹಾಡನು ಹಾಡುತ
ಕಾಯುವೆ ನಿನಗೆ ಬಾ ಬಾರೋ
***
Tuesday, November 10, 2009
ಉದಯವಾಗಲಿ
ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು.
ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು.
ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು.
ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು.
ಕವಿ :
ಹುಯಿಲಗೋಳ ನಾರಾಯಣರಾಯರು
Wednesday, October 14, 2009
ನದಿ
ಕಲ ಕಲ ಸದ್ದನು
ಮಾಡುತ ಮೆಲ್ಲನೆ
ಹರಿಯುವ ಸುಂದರ ನದಿ
ನೀರವ ಕಾಡಿನ
ನಡುವೆ ಸಾಗುತ
ಸೇರುವೆ ಸಾಗರ ತುದಿ
ಸಾಗುವ ದಾರಿಗೆ
ವೇಗವ ಪಡೆಯುತ
ಧುಮ್ಮುಕ್ಕುವ ಝರಿ
ಲೋಕದ ಜನರ
ಜೀವನ ಬೆಳಗಲು
ಸಂಪದ ನೀಡುವ ನದಿ
ಪಾಪವ ಕಳೆಯೆ
ಸ್ನಾನವ ವಿರಚಿಸೆ
ಶುದ್ಧ ತೀರ್ಥವೀ ನದಿ
***
Tuesday, September 29, 2009
ಕುಂಬಳಕಾಯಿ
ದೊಡ್ಡ ದೊಡ್ಡ ಕುಂಬಳಕಾಯಿ
ಪೂಜೆಗೆ ಬೇಕು ಕುಂಬಳಕಾಯಿ
ಪಲ್ಯಕೆ ಬೇಕು ಕುಂಬಳಕಾಯಿ
ಮಜ್ಜಿಗೆ ಹುಳಿಗೆ ಕುಂಬಳಕಾಯಿ
ಅಜ್ಜನ ನೆನಪಿಗೆ ಕುಂಬಳಕಾಯಿ
ಅಜ್ಜಿಯ ತಿಥಿಗೆ ಕುಂಬಳಕಾಯಿ
ರುಚಿ ರುಚಿ ಹಲ್ವಕೆ ಕುಂಬಳಕಾಯಿ
ದೇಹದ ತಂಪಿಗೆ ಕುಂಬಳಕಾಯಿ
***
Monday, September 7, 2009
ವಿಮಾನ ..
ಗಗನದಿ ಹಾರುತ
ಸದ್ದನು ಮಾಡುತ
ಹೋಗುವ ಪುಟ್ಟ ವಿಮಾನ
ದೊಡ್ಡ ರೆಕ್ಕೆಯ
ಲೋಹದ ಹಕ್ಕಿಯೆ?
ಗಗನದಿ ಗಮಿಸುವ ವಿಮಾನ
ಊರಿಂದ ಊರಿಗೆ
ಕ್ಷಣದಲಿ ಸಾಗುವ
ಗಗನ ಗಾಮಿಯೆ ವಿಮಾನ
ದೇಶ ವಿದೇಶವ
ಸುತ್ತುತಾ ಬರಲು
ನೀ ಉಪಕಾರಿಯೇ ವಿಮಾನ
ಕಾಯುವೆ ನಾನು
ನಿನ್ನನು ಏರಲು
ಹಾರುವೆ ಮುಗಿಲೆಡೆ ವಿಮಾನ
***
Older Posts
Subscribe to:
Posts (Atom)
counter
hit counter
ತಾಣ -ಯಾನ
ಪ್ರಸಂಗಾವಲೋಕನ
ಬಲ್ಲಿರೇನಯ್ಯ
Blog Archive
▼
2009
(63)
▼
December
(2)
ಬಾಲನ ಕರೆ ....
ಸೂರ್ಯನಿಗೆ ನಮನ
►
November
(2)
ಚಂದಿರ ಬಾ ಬಾರೋ ..
ಉದಯವಾಗಲಿ
►
October
(1)
ನದಿ
►
September
(2)
ಕುಂಬಳಕಾಯಿ
ವಿಮಾನ ..
►
August
(8)
ಚಕ್ಕುಲಿ..
ಗಣಪನ ಹಬ್ಬ...
ಬೆಳವಣಿಗೆ..
ಜಾರುಬಂಡಿ
ಹಣ್ಣು ..
ಜೋಕಾಲಿ ..
ನರಿರಾಯ ...
ಬಾವಲಿ
►
July
(6)
ಅಕ್ಕನ ಮದುವೆ...
ಇಲಿರಾಯ ...
ಬಾಲ ಗೋಪಾಲ ...
ಮೊಲದ ಮರಿ ..
ಹಣತೆ ...
ಅಜ್ಜನ ಮೀಸೆ ...
►
June
(13)
ನನ್ನಪ್ಪ ....
ಹುಲಿ ಬಂತು ಹುಲಿ..
ಜಿಂಕೆ ಮರಿ ...
ಆನೆ ಬಂತಣ್ಣ ...
ಮಳೆ ಬಂತು ಮಳೆ...
ಪುಟ್ಟ ಗುಬ್ಬಿ ..
ಯಾರು ಏನು ಮಾಡಬೇಕು?
ನಮ್ಮ ಕರು ....
ಕಾಗೆ ...
ಮಂಗಣ್ಣ ...
ಪುಟ್ಟನ ಕನಸು ...
ಗುಡುಗು....
ಮಿಂಚು ...
►
May
(5)
ಮಳೆ - ಬೆಳೆ ...
ಮುಚ್ಚು ಮರೆಯಿಲ್ಲದೆಯೆ .....
ಮಂಗಳ ಪದ್ಯ ...
ಎತ್ತಿನ ಗಾಡಿ ....
ಕಾಡಿಗೆ ಹೋಗೋಣ .....
►
April
(4)
ಪುಟ್ಟ ಇರುವೆ
ಗೂಡಿನೆಡೆಗೆ ತೆರಳುವ .....
ಕೆರೆ ...
ಪುಣ್ಯ ಕ್ಷೇತ್ರ ನೋಡಿದೆನು ....
►
March
(9)
ಯಾಕೆ ಹೀಗೆ ....?
ಗೆಳೆಯನಿಗೆ ವಿದಾಯ ....
ಲಾಟೀನು....
ಕ್ಷೌರ
ಸೂರ್ಯನಿಗೆ ನಮಸ್ಕಾರ ....
ಬೇಡವೇ ಬೇಡ ....
ನನ್ನ ಅಜ್ಜಿ
►
February
(4)
►
January
(7)
►
2008
(104)
►
December
(15)
►
November
(24)
►
October
(17)
►
September
(27)
►
August
(21)