Thursday, February 26, 2009

ಶ್ ! ಸದ್ದು ಮಾಡದಿರಿ



ಶ್ ! ಸದ್ದು ಮಾಡದಿರಿ

ಏನೋ ಪರಿಮಳ ಬರುತಲಿದೆ

ತಿಂಡಿಯ ಪರಿಮಳ ಬರುತಲಿದೆ !



ಅಮ್ಮನು ಒಲೆಯಲಿ ಕರಿಯುತಲಿರಲು

ಬೇಗನೆ ತಿಂಡಿಯು ಸಿಗಲಿದೆ ನಮಗೆ !



ಅಪ್ಪನು ತಂದ ಬಾಳೇ ಕಾಯಿ

ಅಕ್ಕನು ತೆಳ್ಳಗೆ ತುಂಡರಿಸಿ

ಕುದಿಯುವ ಎಣ್ಣೆಗೆ ಬಿಡುವ ಪರಿಮಳ

ತೇಲಿ ಬರುತಿದೆ ಈ ಕಡೆಗೆ !


ಶ್ ! ಸದ್ದು ಮಾಡದಿರಿ
ತಿಂಡಿಯ ಪರಿಮಳ ಬರುತಲಿದೆ !


***


Wednesday, February 25, 2009

ಅಹಾ ! ಗೊಂಬೆ



ಆಹಾ ! ಎಷ್ಟು ಮುದ್ದಿನ ಗೊಂಬೆ
ನೋಡಲು ಬಲು ಅಂದ


ನಿನ್ನ ಕೈಯ್ಯಲಿ ತಿರುಗುವ ಗೊಂಬೆ
ಆಡಲು ಬಲು ಚೆಂದ


ಮಿರಮಿರ ಮಿಂಚುವ ಮುದ್ದಿನ ಗೊಂಬೆ
ಕಾಣಲು ಬಲು ಅಂದ


ನನಗೆ ಕೊಡುವೆಯಾ ಆಡಲು ಅದನು
ಪಡೆಯುವೆ ಆನಂದ


ನಾನೂ ತಮ್ಮನು ಸೇರುತ ಆಡಲು
ಕೊಡುವೆಯ ನಮಗೀಗ ?


ಆಹಾ ! ಎಷ್ಟು ಮುದ್ದಿನ ಗೊಂಬೆ
ನೋಡಲು ಬಲು ಅಂದ

***



Thursday, February 12, 2009

ಬಾಲ ಮುದ್ದು ಕೃಷ್ಣ



ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಂದನು ಮುದ್ದು ಕೃಷ್ಣ
ಬೆಣ್ಣೆ ಮುದ್ದೆ ಕದ್ದು
ತಿನ್ನೋ ಕಳ್ಳ ಕೃಷ್ಣ !


ನವಿಲ ಗರಿಯ ಸೊಗಸಿಗೆ
ಮನಸೋತ ಕೃಷ್ಣ
ತೆಗೆದು ತಲೆಯೊಳಿರಿಸಿ
ಮೆರೆವ ಪುಟಾಣಿ ಕೃಷ್ಣ


ಬಾರೋ ಬಾರೋ ನನ್ನ ಬಳಿ
ಬೇಗನೆ ಕೃಷ್ಣ
ಹಾಲು ಮೊಸರು ಬೆಣ್ಣೆ ಕೊಡುವೆ
ತಿನ್ನೋ ಕೃಷ್ಣ
(ಕವಿ :ಸುಬ್ರಹ್ಮಣ್ಯ ಭಟ್)
***

Wednesday, February 11, 2009

ಎಣ್ಣೆ ಹೊಯ್ಯಮ್ಮ ದೀಪಕ್ಕೆ.....



ಎಣ್ಣೆ ಹೊಯ್ಯಮ್ಮ ದೀಪಕ್ಕೆ
ಬತ್ತಿ ಒಣಗುತ್ತಿದೆ ಬೆಳಕು ಬಾಡುತ್ತಿದೆ
ಕತ್ತಲೆ ಮುಂದೆ ಮುಂದೊತ್ತಿದೆ
ಅತ್ತಲಿ೦ದಿತ್ತಲು ಕಂಡಿಯೊಳಗೆ ನುಗ್ಗಿ
ಒತ್ತರದಲಿ ಗಾಳಿ ಬೀಸುತ್ತಿದೆ :ಎಣ್ಣೆ :


ಹೊರಗಲ್ಲಿ ಗಿಡ ಮರ ಕೊಂಬೆ ರೆ೦ಬೆಗಳು
ಬಡಿದಾಡಿಕೊಂಡು ಭೋರಿಡುತ್ತಿವೆ
ಪಡು ಬಾನ ಕಾರ್ಮುಗಿಲರಿಯೊ೦ದದ೦ನೆ
ಕುಡು ಮಿಂಚಿನಲಿ ಗಹಗಹಿಸುತ್ತಿದೆ :ಎಣ್ಣೆ :


ಹಸಿದ ಮಕ್ಕಳು ಬಟ್ಟಲೆನ್ನದು ತನ್ನದೆಂ
ದೆಳೆದಾಡಿಕೊಂಡು ಗುದ್ದಾಡುತ್ತಿವೆ
ಹಿರಿಯರ ಸಂಧ್ಯಾವಂದನೆ ಸಾಹಿತ್ಯ
ಕಡೆಗಾಲೊಳೆಡವಿ ಚೆಲ್ಲಾಡುತ್ತಿವೆ :ಎಣ್ಣೆ :


ಗೋಡೆಯ ಬಳಿಯಿಂದ ಹಸಿರು ಕಣ್ಣಿನ ಭೂತ
ಹಾಲಾಳಗೆಯ ಬಳಿ ಸಾರುತ್ತಿದೆ
ಗೂಡಿನ ಗಿಳಿ ಹೆಸರೆತ್ತಿ ಕರೆದು ಕೀರಿ
ಕಾಣಾದೆ ನಿನ್ನ ಕಂಗೆಡುತ್ತಲಿದೆ

ಎಣ್ಣೆ ಹೊಯ್ಯಮ್ಮ ದೀಪಕ್ಕೆ...


(ಕವಿ :ಸೇಡಿಯಾಪು ಕೃಷ್ಣ ಭಟ್ )


***