Thursday, August 22, 2013

ನಮ್ಮ ಪುಟ್ಟ

ಪುಟ್ಟನೊಂದು  ಬಾಳೆಹಣ್ಣು  ಸುಲಿದು ತಿಂದನು 
ಸುಲಿದು ತಿಂದು ಸಿಪ್ಪೆಯನ್ನು ನೆಲಕೆ ಒಗೆದನು 
ಪುಟ್ಟನೊಡನೆ ಮಾತನಾಡೆ  ನಾಣಿ ಬಂದನು 
ಓಡಿ  ಬಂದು ಸಿಪ್ಪೆ ತುಳಿಯೆ  ಜಾರಿ ಬಿದ್ದನು 
ಹಿಡಿದು ಪುಟ್ಟನವನ ಜುಟ್ಟು ಏಟು ಕೊಟ್ಟನು 
ತಪ್ಪನರಿತ ಪುಟ್ಟ ಸಿಪ್ಪೆಯನ್ನು  ತಿಪ್ಪೆಗೆಸೆದನು 
ಜಾಣ ಬಾಲನಂತೆ  ತನ್ನ ಮನೆಗೆ ನಡೆದನು 
                                                                                                     -ಮಂಜೇಶ್ವರ ಗೋವಿಂದ ಪೈ